ತೆರಿಗೆ ಬಾಕಿ ವಸೂಲಿ ಅಭಿಯಾನಕ್ಕೆ ಬಿಬಿಎಂಪಿ ಮುಂದು! ಬಿಬಿಎಂಪಿಯ ಮಹದೇವಪುರ ವಲಯವು 83,330 ಆಸ್ತಿಗಳೊಂದಿಗೆ ತೆರಿಗೆ ಸುಸ್ತಿದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಬೊಮ್ಮನಹಳ್ಳಿ ವಲಯ 62,226 ಆಸ್ತಿಗಳೊಂದಿಗೆ ಮತ್ತು ರಾಜರಾಜೇಶ್ವರಿ ನಗರ ವಲಯವು 59,419 ಆಸ್ತಿಗಳೊಂದಿಗೆ 3ನೇ ಸ್ಥಾನ ಪಡೆದಿದೆ. ಬೆಂಗಳೂರು: ಆಸ್ತಿ ತೆರಿಗೆ ಬಾಕಿಯನ್ನು ಪಾವತಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗೆ ಅವಕಾಶ ನೀಡಿದ್ದರೂ, ಕೆಲವೇ ಕೆಲವು ಮಂದಿ ಮಾತ್ರ ಇದರ ಉಪಯೋಗ ಪಡದುಕೊಂಡಿದ್ದಾರೆ. ಅಡಿಯಲ್ಲಿ, ದಂಡದ ಮೊತ್ತದ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ಮತ್ತು ಬಡ್ಡಿ ಮೊತ್ತದ ಶೇಕಡಾ 100 ರಷ್ಟು ಸಡಿಲಿಕೆಯನ್ನು ನೀಡುತ್ತದೆ. ಆದಾಗ್ಯೂ, 3.95 ಲಕ್ಷ ತೆರಿಗೆ ಬಾಕಿದರರಲ್ಲಿ, ಕೇವಲ ಶೇ. 20 ರಷ್ಟು ಜನರು ಮಾತ್ರ ಪ್ರಯೋಜನವನ್ನು ಪಡೆದಿದ್ದಾರೆ. ಬಿಬಿಎಂಪಿಯು 733.71 ಕೋಟಿ ರೂ.ಗಳ ತೆರಿಗ ಬಾಕಿ ಸಂಗ್ರಹಿಸುವ ಗುರಿ ಹೊಂದಿತ್ತು ಆದರೆ ಕೇವಲ 100 ಕೋಟಿ ರೂ ಮಾತ್ರ ಸಂಗ್ರಹವಾಗಿದೆ. ಯೋಜನೆಯು ಜುಲೈ 31 ರಂದು ಕೊನೆಗೊಳ್ಳಲ್ಲಿದ್ದು ಅದಾದ ನಂತರ, ಬಿಬಿಎಂಪಿ ವಸೂಲಿ ಪ್ರಾರಂಭಿಸುತ್ತದೆ.ಏಪ್ರಿಲ್ 1 ರವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಬಿಬಿಎಂಪಿಯ ಮಹದೇವಪುರ ವಲಯವು 83,330 ಆಸ್ತಿಗಳೊಂದಿಗೆ ತೆರಿಗೆ ಸುಸ್ತಿದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಬೊಮ್ಮನಹಳ್ಳಿ ವಲಯ 62,226 ಆಸ್ತಿಗಳೊಂದಿಗೆ ಮತ್ತು ರಾಜರಾಜೇಶ್ವರಿ ನಗರ ವಲಯವು 59,419 ಆಸ್ತಿಗಳೊಂದಿಗೆ 3ನೇ ಸ್ಥಾನ ಪಡೆದಿದೆ. ಏಪ್ರಿಲ್ 1 ರಂದು ಒಟ್ಟು ತೆರಿಗೆ ಡೀಫಾಲ್ಟ್ ಮೊತ್ತವು 733.71 ಕೋಟಿ ರೂಪಾಯಿಗಳಷ್ಟಿತ್ತು. ಜುಲೈ 1 ರ ಹೊತ್ತಿಗೆ, ಯೋಜನೆಯನ್ನು ಪರಿಚಯಿಸಿದ ನಂತರ, ಒಟ್ಟು 3,95,250 ಡಿಫಾಲ್ಟರ್‌ಗಳಲ್ಲಿ 70,402 ಜನರು ಮಾತ್ರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.ಬಿಬಿಎಂಪಿ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಿತು, ಇದರ ಲಾಭಗಳನ್ನು ಬಳಸಿಕೊಳ್ಳಲು ಮತ್ತು ಬಾಕಿ ಪಾವತಿಸಲು ಪ್ರೋತ್ಸಾಹಿಸಿತು. ಆದರೆ, ಸುಸ್ತಿದಾರರಿಂದ ಈ ರೀತಿಯ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಬಿಬಿಎಂಪಿ ನೀಡಿದ ನೋಟಿಸ್‌ಗಳಿಗೆ ಪ್ರತಿಕ್ರಿಯಿಸದ ಸುಸ್ತಿದಾರರ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಹರಾಜು ಮಾಡಲು ನಾಗರಿಕ ಸಂಸ್ಥೆಗೆ ಅಧಿಕಾರವಿದೆ. ತೆರಿಗೆ ಸುಸ್ತಿದಾರರ ಅನುಕೂಲಕ್ಕಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದೆ ಮತ್ತು ಇದನ್ನು ಜುಲೈ 31 ರ ನಂತರ ವಿಸ್ತರಿಸಲಾಗುವುದಿಲ್ಲ. ಇದೇ ರೀತಿಯ ಒಟಿಎಸ್ ಅನ್ನು ಮತ್ತೆ ಪರಿಚಯಿಸುವ ಸಾಧ್ಯತೆಯಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇನ್ನೂ ಸುಮಾರು 25 ದಿನಗಳು ಉಳಿದಿವೆ ಎಂದು ಅವರು ಹೇಳಿದರು ಮತ್ತು ಜುಲೈ 31 ರಂದು ಗಡುವು ಮುಗಿದ ನಂತರ ನಾಗರಿಕ ಸಂಸ್ಥೆಯು ಮರುಪಡೆಯುವಿಕೆ ಡ್ರೈವ್‌ಗಳನ್ನು ಯೋಜಿಸುತ್ತಿರುವುದರಿಂದ ಡಿಫಾಲ್ಟರ್‌ಗಳು ಬಂದು ತಮ್ಮ ಬಾಕಿಯನ್ನು ಪಾವತಿಸಲು ಕರೆ ನೀಡಿದರು.